ಮಂಗಳವಾರ, ಜುಲೈ 4, 2017

ಹೇಗೆ ತಾನೆ ಅರ್ಥವಾದೀತು?

ಹೇಗೆ ತಾನೆ ಅರ್ಥವಾದೀತು?

ನಾಲ್ಕಾರು ಜನರು
ಬೀದಿಯ ಕೊನೆಯ ಮನೆಯ
ಮುಂದೆ ಕೈ ಕಟ್ಟಿ ನಿಂತಿದ್ದಾರೆ,
ಎಂದೂ ಇಲ್ಲದ ಜನರು
ಇಂದೇಕೋ ಅಲ್ಲಿದ್ದಾರೆ.
ಊರ ತುಂಬಾ
ಸಿಡಿಮಿಡಿಯೆನ್ನುತ್ತಿದ್ದ
ಆ ಮನುಷ್ಯನ ಸದ್ದಿಲ್ಲ.
ತೇಟ್ ಭೂತಯ್ಯನ
ಪ್ರತಿರೂಪವೇ...


ಮೂವತ್ತು ವರುಷದ ನಂತರ
ಆ ಮನೆಯ ಮುಂದೆ
ಬೆಂಕಿಯ ನರ್ತನ,
ಬೀದಿಯ ತುಂಬೆಲ್ಲಾ
ಸ್ಮಶಾನ ಮೌನ,
ಅವನ ನೇರ ನುಡಿಗೋ,
ಕಡು ಕೋಪಕ್ಕೋ,
ಊರ ಜನಕೆಲ್ಲ
ಅವನೆಂದರೆ ಸಿಟ್ಟು,
ಒಂಟಿ ಜೀವದ
ಅಂತರಾಳದ ನೋವು
ಹೇಗೆ ತಾನೆ ಅರ್ಥವಾದೀತು.


ಇನ್ನು ಅವನಿಲ್ಲ ,
ಅವನ ಸಿಡಿಮಿಡಿಯಿಲ್ಲ,
ಕಂಬನಿ ಮಿಡಿಯುವವರೂ ಇಲ್ಲ,
ಅದೇಕೋ ಏನೋ
ಅವನು ಸಾಕಿದ ನಾಯಿ ಮಾತ್ರ
ಒಂದೇ ಸಮನೆ
ಅಳುತಲಿದೆ.


- ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ